2023-05-09 07:51:00
ನಾನೊಬ್ಬ ವೋಟ್ ಮಾಡಿಲ್ಲ ಅಂದ್ರೆ ಏನಾಗುತ್ತೆ? ಅಂತ ಕೇಳ್ತಾರಲ್ಲ ಅಂತವರಿಗೆ ಇದನ್ನ ತೋರ್ಸಿ.ಪ್ರೀತಿಯ ಕನ್ನಡಿಗರೇ,
ಇವತ್ತು ನೀವು
₹10 ಕೊಟ್ಟು ಒಂದು
ಬಿಸ್ಕಿಟ್ ತಗೋತೀರಲ್ಲ,
ಅದರಲ್ಲಿ
ಎಂಟಾನೇ ಸರ್ಕಾರಕ್ಕೆ ಹೋಗುತ್ತೆ.
₹100 ಕೊಟ್ಟು ಪೆಟ್ರೋಲ್ ಹಾಕಿಸಿದ್ರೆ
₹50 ರಿಂದ ₹60 ಸರ್ಕಾರಕ್ಕೆ ತಲುಪುತ್ತೆ.
"ಅಯ್ಯೋ, ಅಮ್ಮಾ, ಹುಷಾರಿಲ್ಲ!" ಅಂತ ಆಸ್ಪತ್ರೆಗೆ ಹೋದ್ರಿ ಅನ್ಕೊಳ್ಳೋಣ.
ಅಲ್ಲಿ, ನೀವು ಕೊಳ್ಳುವ ಪ್ರತಿ
₹1000 ರೂಪಾಯಿಯ ಔಷಧಿ ಅಥವಾ ಪಡೆಯುವ ಚಿಕಿತ್ಸೆಯಲ್ಲಿ
₹180 ಸರ್ಕಾರದ ಪಾಲಿದೆ!
ಅಷ್ಟೇ ಯಾಕೆ?
ನೀವು
IAS, KAS, PSI, FDA ಆಗಲು ಅಂತಾ, ಕೋಚಿಂಗಳನ್ನು ಸೇರುತ್ತಿರಲ್ಲಾ,
ಅದರಲ್ಲಿ ನೀವು ಕೊಡುವ
₹1,00,000 ಫೀಸ್ ನಲ್ಲಿ
18,000 ರೂಪಾಯಿಗಳು ಸರ್ಕಾರದ ಜೇಬು ತುಂಬಿಸುತ್ತವೆ.
ಶಾಕ್ ಆಗ್ಬೇಡಿ ಇದು ಸ್ಯಾಂಪಲ್ ಮಾತ್ರ!ಒಬ್ಬ ಬಸ್ ಕಂಡಕ್ಟರ್ ಚಿಲ್ಲರೆ ಕೊಡ್ಲಿಲ್ಲಾ ಅಂದ್ರೆ ಜಗಳಾ ತೆಗಿಯೊ ನಾವು, ಸರ್ಕಾರಕ್ಕೆ ರಾಶಿ ರಾಶಿ ಹಣದ ಮಳೆಯನ್ನೇ ಸುರಿತಾ ಇದ್ದೀವಿ, ಅದು ಗೊತ್ತಾ?ನಿಮ್ಮ ಮನೆಯಲ್ಲಿ ಎಷ್ಟು ತರಹದ ವಸ್ತುಗಳಿವೆ ಅಂತಾ ನೀವೇ ಲೆಕ್ಕಾಹಾಕಿ ನೋಡಿ.
ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್, ವಿದ್ಯುತ್ತು, ನೀರು, ಅದು-ಇದು ಅಂತ ಹೇಳಿ ಎಲ್ಲಾ ಕಡೆ ನೀವು ಸರ್ಕಾರಕ್ಕೆ ಅಂತ ಪ್ರತಿ ದಿನ ದುಡ್ಡು ಕೊಡ್ತಾನೆ ಇದ್ದೀರಿ.
ಆ ದುಡ್ಡು ತಗೊಂಡು ಸರಿಯಾದ ಸೌಲಭ್ಯ-ಸೇವೆ ಕೊಡಬೇಕಾದ್ದು ಸರ್ಕಾರದ ಜವಾಬ್ದಾರಿ ಹೌದೋ ಅಲ್ವೋ?
ಅದಕ್ಕಾಗಿ ಒಳ್ಳೆಯ ಪ್ರತಿನಿಧಿಯ ಮತ್ತು ಒಳ್ಳೆಯ ಸರ್ಕಾರವನ್ನ ಆಯ್ಕೆ ಮಾಡೋದು ನಿಮ್ಮ ಗುರುತರ ಹೊಣೆಗಾರಿಕೆ.
ಮತದಾನ ಬರಿ ನಿಮ್ಮ ಹಕ್ಕು ಅಲ್ಲ ಕಣ್ರಿ.
ಅದು ನಿಮ್ಮ ಜವಾಬ್ದಾರಿ.
ನಿಮ್ಮ ಅಜ್ಜ-ಅಜ್ಜಿ, ಅಪ್ಪ-ಅಮ್ಮ ಯಾರಿಗೆ ವೋಟ್ ಒತ್ತಿದ್ರೋ , ಅವರಿಂದ ಇವತ್ತು ನಿಮ್ಮ ಸ್ಥಿತಿ ಹೀಗಿದೆ.
ನೀವು ಯಾರಿಗೆ ಒತ್ತುತ್ತೀರೋ ಅದರ ಮೇಲೆ ಮುಂದಿನ ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯ ನಿಂತಿರುತ್ತೆ.
ಯಾವುದೇ ಪಕ್ಷ ಇರಲಿ, ಯಾರೇ ವ್ಯಕ್ತಿ ಇರಲಿ, ಒಟ್ನಲ್ಲಿ ಹೋಗಿ.
ಈ ಚುನಾವಣಾ ಹಬ್ಬದಲ್ಲಿ ಪಾಲ್ಗೊಳ್ಳಿ.
ಆ ಇವಿಎಂ ಮೇಲೆ ನಿಮ್ಮ ಹೆಮ್ಮೆಯ ಬೆರಳನ್ನು ಒತ್ತಿ ಬನ್ನಿ.
“ಮತದಾನ ಮಾಡದವನೇ ನಿಜವಾದ ದೇಶದ್ರೋಹಿ!”ನಿಮ್ಮ ಸ್ನೇಹಿತರಿಗೂ ಇದನ್ನ ಶೇರ್ ಮಾಡಿ ಒಳ್ಳೆಯದಾಗಲಿ.
-
ಪ್ರವೀಣ ಮಗದುಮ್
#karnatakaelection2023
2.1K viewsedited 04:51